Vijayendra Yediyurappa

Official YouTube channel of Shri Vijayendra Yediyurappa
State President, Bharathiya Janatha Party, Karnataka | MLA- Shikaripura Constituency.


Office of B.Y. Vijayendra

ಉಕ್ಕಿನ ನಗರಿ ಭದ್ರಾವತಿಯಲ್ಲಿ ಉಕ್ಕಿ ಹರಿದ ಭಕ್ತಿ, ಆಧ್ಯಾತ್ಮ ಮತ್ತು ಸೇವಾ ಭಾವಧಾರೆ;

ಸಿರಿಗೆರೆ ಬೃಹನ್ಮಠದ ಪರಮಪೂಜ್ಯ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ, ಭದ್ರಾವತಿಯಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವ-2026 ಕಾರ್ಯಕ್ರಮದಲ್ಲಿ ಇಂದು ಭಾಗವಹಿಸಿ, ಶ್ರೀಗಳ ಕೃಪಾಶೀರ್ವಾದ ಪಡೆಯಲಾಯಿತು.

ಈ ಸಂದರ್ಭದಲ್ಲಿ ಸಂಸದರು ಹಾಗೂ ಮಾಜಿ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ, ಸಚಿವರಾದ ಶ್ರೀ ಎಸ್.ಎಸ್.ಮಲ್ಲಿಕಾರ್ಜುನ್, ಶ್ರೀ ದಿನೇಶ್ ಗುಂಡೂರಾವ್, ಮಾಜಿ ಸಂಸದ ಶ್ರೀ ಜಿ.ಎಂ ಸಿದ್ದೇಶ್ವರ್, ಶಾಸಕರುಗಳಾದ ಶ್ರೀ ಬಿ.ಪಿ ಹರೀಶ್, ಶ್ರೀ ಬಿ ಕೆ ಸಂಗಮೇಶ್, ಮಾಜಿ ಶಾಸಕರಾದ ಶ್ರೀ ಅಶೋಕ್ ನಾಯ್ಕ್, ಪ್ರಮುಖರಾದ ಶ್ರೀ ಬಸವರಾಜಪ್ಪ ಸೇರಿದಂತೆ ಹಲವಾರು ಗಣ್ಯರು, ಭಕ್ತರು ಉಪಸ್ಥಿತರಿದ್ದರು.

2 weeks ago | [YT] | 25

Office of B.Y. Vijayendra

Heartily welcome Hon’ble President of India, Smt. Droupadi Murmu ji, to Karnataka as she formally inaugurates the seven day 1066th Jayanti Mahotsava of the Adi Jagadguru of Suttur Mutt, Sri Shivarathri Shivayogi Swamiji, at Shanti College Grounds, Malavalli, Mandya district.

Her gracious presence at this sacred occasion honours the timeless legacy of spiritual wisdom, social service and inclusive values upheld by the Suttur Mutt for over a millennium.

2 months ago | [YT] | 1

Office of B.Y. Vijayendra

ಕಾಂಗ್ರೆಸ್ ಸರ್ಕಾರದ ವಿರುದ್ಧ ಬೆಳಗಾವಿಯಲ್ಲಿ ಮೊಳಗಿದ ಅನ್ನದಾತರ ರಣಕಹಳೆ

2 months ago | [YT] | 1

Office of B.Y. Vijayendra

ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದಲ್ಲಿ ನಡೆಯುತ್ತಿರುವ ಪರಮಪೂಜ್ಯ ಶ್ರೀ ಡಾ. ಶಿವಬಸವ ಮಹಾಸ್ವಾಮಿಗಳವರ 136ನೇ ಜಯಂತಿ ಮಹೋತ್ಸವದ ಪ್ರಯುಕ್ತ ಇಂದು ಶ್ರೀಮಠದ ಸ್ವಾಮೀಜಿಗಳಾದ ಪರಮಪೂಜ್ಯ ಶ್ರೀ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳನ್ನು ಮತ್ತು ಎಡೆಯೂರು ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಪರಮಪೂಜ್ಯ ಶ್ರೀ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲಾಯಿತು.

ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಶ್ರೀ ಅನಿಲ್ ಬೆನಕೆ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಮಹಂತೇಶ್ ಕವಠಗಿಮಠ, ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶ್ರೀ ಸುಭಾಷ್ ಪಾಟೀಲ್, ಮುಖಂಡರಾದ ಶ್ರೀ ಮಹಾಂತೇಶ್ ವಕ್ಕುಂದ್ ಸೇರಿದಂತೆ ಹಲವಾರು ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

2 months ago | [YT] | 1

Office of B.Y. Vijayendra

ಹೆಮ್ಮೆಯ ಪ್ರಧಾನಿ ಶ್ರೀ ‪@NarendraModi‬ ಜೀ ಅವರಿಗೆ ಕರ್ನಾಟಕವೆಂದರೆ ವಿಶೇಷ ಕಾಳಜಿ, ದೇಶದ ಪ್ರಗತಿಯೊಂದಿಗೆ ರಾಜ್ಯದ ಅಭಿವೃದ್ಧಿಗೆ ಅವರು ಕೊಟ್ಟ ಕೊಡುಗೆಗಳು ಅನನ್ಯ. ಕನ್ನಡ ನಾಡಿನ ಜನರ ಹಿತಕಾಯುವುದರ ಜತೆಗೆ ಇಲ್ಲಿನ ಸಾಂಸ್ಕೃತಿಕ ಹಿರಿಮೆ, ಪರಂಪರೆಯ ಉಳಿವಿಗಾಗಿ ತಮ್ಮ ಬದ್ಧತೆಯನ್ನು ಪ್ರತಿ ಬಾರಿಯೂ ತೋರಿದ್ದಾರೆ.

ಮೆಟ್ರೋ, ರಾಷ್ಟ್ರೀಯ ಹೆದ್ದಾರಿ, ಸಾರಿಗೆ, ವಸತಿ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯ ಕ್ರಾಂತಿಗೆ ಮುನ್ನುಡಿ ಬರೆದು ಪ್ರತಿ ಮನೆಗೂ ಒಂದಿಲ್ಲೊಂದು ಜನಪರ ಯೋಜನೆಗಳ ಮೂಲಕ ತಲುಪಿರುವ ಅವರ ಅಭಿವೃದ್ಧಿಯ ಹೆಜ್ಜೆ ಗುರುತುಗಳ ಕುರಿತು DD ಚಂದನ ವಾಹಿನಿಯಲ್ಲಿ ಪ್ರಸಾರವಾಗಿರುವ ಕಾರ್ಯಕ್ರಮ ವೀಕ್ಷಿಸೋಣ.

5 months ago | [YT] | 0